ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಪೈಪೋಟಿ ನೀಡಿ ಪುರುಷರಿಗೆ ಸಮನಾಗಿ ನಿಲ್ಲುತ್ತಿದ್ದಾರೆ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿಯೂ ಸಾಕಷ್ಟು ಬಲಿಷ್ಠರಾಗಿದ್ದಾರೆ, ಶೈಕ್ಷಣಿಕವಾಗಿಯೂ ಮಹಿಳೆಯರದ್ದೇ ಮೇಲುಗೈ ಹೀಗಿರುವಾಗ ರಾಜಕೀಯವಾಗಿ ಬೆಳೆಯಲು ಪೂರಕವಾದ ವಾತಾವರಣ ನಮ್ಮಲ್ಲಿ ಇನ್ನು ಸಾಧ್ಯವಾಗುತ್ತಿಲ್ಲ. 130ಕೋಟಿ ಜನಸಂಖ್ಯೆಯಿರುವ ನಮ್ಮ ದೇಶದಲ್ಲಿ ಲೋಕಸಭೆಯಲ್ಲಿ ಇರುವ ಒಟ್ಟು 543ಸ್ಥಾನದಲ್ಲಿ ಮಹಿಳೆಯರಿಗೆ ದಕ್ಕಿರುವುದು ಕೇವಲ 66 ಸ್ಥಾನಗಳು ಶೇಕಡಾವಾರು ಕೇವಲ 12.15% ಮಾತ್ರ.
ಮೊನ್ನೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಇರುವ ಒಟ್ಟು 222 ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಸಿಕ್ಕಿರುವುದು ಕೇವಲ 7 ಕ್ಷೇತ್ರಗಳು, ಶೇಕಡಾವಾರು 3.15% ಮಾತ್ರ. ಆರೂವರೆ ಕೋಟಿ ಜನಸಂಖ್ಯೆ ಇರುವ ನಮ್ಮ ಕರ್ನಾಟಕದಲ್ಲಿ ಪುರುಷರು ಮತ್ತು ಮಹಿಳೆಯರು ಸಮಬಲದಲ್ಲಿದ್ದರೂ ಮಹಿಳಾ ಪ್ರತಿನಿಧಿಗಳ ಸಂಖ್ಯೆ ಭಾರಿ ಕಡಿಮೆ ಪ್ರಮಾಣದಲ್ಲಿರುವುದು ಶೋಚನೀಯ ಸಂಗತಿ.
ಈಗಾಗಲೇ ಇಂದಿರಾಗಾಂಧಿ, ಮಾಯಾವತಿ, ಮಮತಾ ಬ್ಯಾನರ್ಜಿ ಮತ್ತು ಜಯಲಲಿತರಂತಹ ದಿಟ್ಟ ಮಹಿಳೆಯರು ರಾಷ್ಟ್ರ ಮತ್ತು ರಾಜ್ಯಗಳನ್ನು ನಿಭಾಯಿಸಿ ತೋರಿಸಿದ್ದಾರೆ. ಈಗಿರುವ ಕೇಂದ್ರ ಸರ್ಕಾರದಲ್ಲಿ ಸುಷ್ಮಾ ಸ್ವರಾಜ್, ಸ್ಮೃತಿ ಇರಾನಿ ಮತ್ತು ನಿರ್ಮಲ ಸೀತಾರಾಮನ್ ರವರುಗಳು ತಮ್ಮ ಜವಾಬ್ದಾರಿಗಳನ್ನು ಪುರುಷರಿಗಿಂತ ಕಡಿಮೆಯಿಲ್ಲದಂತೆ ನಿಭಾಯಿಸುತ್ತಿದ್ದಾರೆ
ಕಾರ್ಪೊರೇಟ್ ವಲಯದಲ್ಲಿ ಕಿರಣ್ ಮಝುನ್ದಾರ್ ಷಾ , ಬ್ಯಾಂಕ್ ವಲಯದಲ್ಲಿ ಅರುಂಧತಿ ಭಟ್ಟಾಚಾರ್ಯ, ಚಂದ ಕೊಚ್ಚಾರ್ ರಂತವರುಗಳು ದೊಡ್ಡ ಹುದ್ದೆಗಳನ್ನು ಮಹಿಳೆಯರೂ ಕೂಡ ನಿಭಾಯಿಸಬಹುದೆಂದು ತೋರಿಸಿಕೊಟ್ಟಿದ್ದಾರೆ. ಮನೆ ನೆಡೆಸುವುದರಿಂದ ಹಿಡಿದು ದೇಶ ಮುನ್ನೆಡೆಸುವುದರವರೆಗೆ ಸಮರ್ಥ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮಹಿಳೆಯರೇ ಎಂದು ಸಾಬೀತಾಗಿದ್ದರೂ ರಾಜಕೀಯದಲ್ಲಿ ಮಹಿಳೆಯರಿಗೆ ಪ್ರೋತ್ಸಾಹ ಮತ್ತು ಹೆಚ್ಚಿನ ಅವಕಾಶಗಳು ದೊರೆಯದಿರುವುದು ಯೋಚಿಸಬೇಕಾದ ಸಂಗತಿ.
ಮಹಿಳೆಯರ ಯೋಚನಾ ಲಹರಿ ಮತ್ತು ಪುರುಷರ ಯೋಚನಾಲಹರಿ ಬೇರೆ ಬೇರೆ, ಪುರುಷರೇ ಹೆಚ್ಚಾಗಿರುವ ಸದನದಲ್ಲಿ ಮಹಿಳೆಯರ ಮಾತಿಗೆ ಮನ್ನಣೆ ಸಿಗುವುದು ಕಷ್ಟ. ಮಹಿಳೆಯರ ಸಂಖ್ಯೆ ಕಡಿಮೆ ಇರುವ ಈಗಿನ ಪರಿಸ್ಥಿತಿಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಸ್ಥಾನಗಳಿಂದ ಮಹಿಳೆಯರು ಹೊರಗುಳಿಯುವುದರಿಂದ ಮಹಿಳಾ ಸಬಲೀಕರಣಕ್ಕೆ ಬೇಕಾದ ಪೂರಕವಾದ ವಾತಾವರಣವನ್ನು ಸೃಷ್ಟಿಸುವಲ್ಲಿ ಈಗಿನ ಸರ್ಕಾರಗಳು ವಿಫಲವಾಗಿವೆ ಎಂದೆನಿಸುತ್ತಿದೆ.
ಈಗಿನ ಬಹುತೇಕ ಚುನಾವಣೆಗಳಲ್ಲಿ ಮಹಿಳೆಯರಿಗಾಗಿ ಮೀಸಲಾತಿಯಿದೆ ಇದು ಸ್ವಾಗತಾರ್ಹವೇ ಆದರು ಮೀಸಲಾತಿ ಇರುವ ಕಡೆ ಚುನಾವಣೆಗೆ ಸ್ಪರ್ಧಿಸುವ ಬಹುತೇಕ ಮಹಿಳೆಯರು ರಾಜಕಾರಣಿಗಳ ಹೆಂಡತಿ ಮಗಳು ಅಥವಾ ರಾಜಕೀಯ ಕುಟುಂಬದ ಸಂಬಂಧಿಗಳಾಗಿರುತ್ತಾರೆ, ಇಂತಹ ಹಿನ್ನೆಲೆಯಿಂದ ಚುನಾಯಿತರಾದ ಬಹುತೇಕ ಮಹಿಳೆಯರು ಡಮ್ಮಿಗಳಾಗಿರುತ್ತಾರೆ ಅಧಿಕಾರವೆಲ್ಲವೂ ಅವರ ಮನೆಯ ಗಂಡಸರದ್ದೇ ಆಗಿರುತ್ತದೆ. ಅಧಿಕಾರ ಗಂಡಸರದ್ದಿರುವಾಗ ಮಹಿಳೆಯರಿಗಾಗಿ ಸಮಾಜದಲ್ಲಿ ಬದಲಾವಣೆ ತರುವುದು ಹೇಗೆ ಸಾಧ್ಯ ?
ಸದ್ಯದ ಪರಿಸ್ಥಿತಿಯಲ್ಲಿ ಪ್ರತಿಭೆ ಮತ್ತು ನಾಯಕತ್ವದ ಗುಣ ಇರುವವರು ಒಳ್ಳೆಯ ನಾಯಕರಾಗಬಹುದೇವರತು ರಾಜಕೀಯ ನಾಯಕರಾಗುವುದು ಕಷ್ಟಸಾಧ್ಯ.
ಹಣ ಬಲ ಮತ್ತು ತೋಳ್ಬಲ ಇರುವವರು ಮಾತ್ರ ರಾಜಕೀಯ ನಾಯಕರಾಗಬಹುದು ಎಂಬ ಮಾತಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಪ್ರತಿಭಾವಂತ ಮಹಿಳೆಯರಿಗೆ ಅವಕಾಶಗಳು ಸಿಕ್ಕಿ , ಸಮಾಜದಲ್ಲಿ ಈಗಿರುವ ರಾಜಕೀಯದ ಬಗೆಗಿನ ಅಭಿಪ್ರಾಯಗಳು ಬದಲಾದರೆ,
ಎಲ್ಲಾ ಎಲ್ಲೆಗಳ ಗೋಡೆಗಳನ್ನು ಕೆಡವಿ ಸಮರ್ಥನಾಯಕಿಯರು ನಮ್ಮ ಜನಪ್ರತಿನಿಧಿಗಳಾಗುವ ಕಾಲವು ದೂರವಿಲ್ಲ. ಮಹಿಳಾ ಮುಖ್ಯಮಂತ್ರಿಯು ನಮ್ಮ ಕರ್ನಾಟಕವನ್ನಾಳುವ ಕನಸು ನನಸಾಗದೇ ಇರುವುದಿಲ್ಲ.
ಈಗಾಗಲೇ ಇಂದಿರಾಗಾಂಧಿ, ಮಾಯಾವತಿ, ಮಮತಾ ಬ್ಯಾನರ್ಜಿ ಮತ್ತು ಜಯಲಲಿತರಂತಹ ದಿಟ್ಟ ಮಹಿಳೆಯರು ರಾಷ್ಟ್ರ ಮತ್ತು ರಾಜ್ಯಗಳನ್ನು ನಿಭಾಯಿಸಿ ತೋರಿಸಿದ್ದಾರೆ. ಈಗಿರುವ ಕೇಂದ್ರ ಸರ್ಕಾರದಲ್ಲಿ ಸುಷ್ಮಾ ಸ್ವರಾಜ್, ಸ್ಮೃತಿ ಇರಾನಿ ಮತ್ತು ನಿರ್ಮಲ ಸೀತಾರಾಮನ್ ರವರುಗಳು ತಮ್ಮ ಜವಾಬ್ದಾರಿಗಳನ್ನು ಪುರುಷರಿಗಿಂತ ಕಡಿಮೆಯಿಲ್ಲದಂತೆ ನಿಭಾಯಿಸುತ್ತಿದ್ದಾರೆ
ಕಾರ್ಪೊರೇಟ್ ವಲಯದಲ್ಲಿ ಕಿರಣ್ ಮಝುನ್ದಾರ್ ಷಾ , ಬ್ಯಾಂಕ್ ವಲಯದಲ್ಲಿ ಅರುಂಧತಿ ಭಟ್ಟಾಚಾರ್ಯ, ಚಂದ ಕೊಚ್ಚಾರ್ ರಂತವರುಗಳು ದೊಡ್ಡ ಹುದ್ದೆಗಳನ್ನು ಮಹಿಳೆಯರೂ ಕೂಡ ನಿಭಾಯಿಸಬಹುದೆಂದು ತೋರಿಸಿಕೊಟ್ಟಿದ್ದಾರೆ. ಮನೆ ನೆಡೆಸುವುದರಿಂದ ಹಿಡಿದು ದೇಶ ಮುನ್ನೆಡೆಸುವುದರವರೆಗೆ ಸಮರ್ಥ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮಹಿಳೆಯರೇ ಎಂದು ಸಾಬೀತಾಗಿದ್ದರೂ ರಾಜಕೀಯದಲ್ಲಿ ಮಹಿಳೆಯರಿಗೆ ಪ್ರೋತ್ಸಾಹ ಮತ್ತು ಹೆಚ್ಚಿನ ಅವಕಾಶಗಳು ದೊರೆಯದಿರುವುದು ಯೋಚಿಸಬೇಕಾದ ಸಂಗತಿ.
ಮಹಿಳೆಯರ ಯೋಚನಾ ಲಹರಿ ಮತ್ತು ಪುರುಷರ ಯೋಚನಾಲಹರಿ ಬೇರೆ ಬೇರೆ, ಪುರುಷರೇ ಹೆಚ್ಚಾಗಿರುವ ಸದನದಲ್ಲಿ ಮಹಿಳೆಯರ ಮಾತಿಗೆ ಮನ್ನಣೆ ಸಿಗುವುದು ಕಷ್ಟ. ಮಹಿಳೆಯರ ಸಂಖ್ಯೆ ಕಡಿಮೆ ಇರುವ ಈಗಿನ ಪರಿಸ್ಥಿತಿಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಸ್ಥಾನಗಳಿಂದ ಮಹಿಳೆಯರು ಹೊರಗುಳಿಯುವುದರಿಂದ ಮಹಿಳಾ ಸಬಲೀಕರಣಕ್ಕೆ ಬೇಕಾದ ಪೂರಕವಾದ ವಾತಾವರಣವನ್ನು ಸೃಷ್ಟಿಸುವಲ್ಲಿ ಈಗಿನ ಸರ್ಕಾರಗಳು ವಿಫಲವಾಗಿವೆ ಎಂದೆನಿಸುತ್ತಿದೆ.
ಈಗಿನ ಬಹುತೇಕ ಚುನಾವಣೆಗಳಲ್ಲಿ ಮಹಿಳೆಯರಿಗಾಗಿ ಮೀಸಲಾತಿಯಿದೆ ಇದು ಸ್ವಾಗತಾರ್ಹವೇ ಆದರು ಮೀಸಲಾತಿ ಇರುವ ಕಡೆ ಚುನಾವಣೆಗೆ ಸ್ಪರ್ಧಿಸುವ ಬಹುತೇಕ ಮಹಿಳೆಯರು ರಾಜಕಾರಣಿಗಳ ಹೆಂಡತಿ ಮಗಳು ಅಥವಾ ರಾಜಕೀಯ ಕುಟುಂಬದ ಸಂಬಂಧಿಗಳಾಗಿರುತ್ತಾರೆ, ಇಂತಹ ಹಿನ್ನೆಲೆಯಿಂದ ಚುನಾಯಿತರಾದ ಬಹುತೇಕ ಮಹಿಳೆಯರು ಡಮ್ಮಿಗಳಾಗಿರುತ್ತಾರೆ ಅಧಿಕಾರವೆಲ್ಲವೂ ಅವರ ಮನೆಯ ಗಂಡಸರದ್ದೇ ಆಗಿರುತ್ತದೆ. ಅಧಿಕಾರ ಗಂಡಸರದ್ದಿರುವಾಗ ಮಹಿಳೆಯರಿಗಾಗಿ ಸಮಾಜದಲ್ಲಿ ಬದಲಾವಣೆ ತರುವುದು ಹೇಗೆ ಸಾಧ್ಯ ?
ಸದ್ಯದ ಪರಿಸ್ಥಿತಿಯಲ್ಲಿ ಪ್ರತಿಭೆ ಮತ್ತು ನಾಯಕತ್ವದ ಗುಣ ಇರುವವರು ಒಳ್ಳೆಯ ನಾಯಕರಾಗಬಹುದೇವರತು ರಾಜಕೀಯ ನಾಯಕರಾಗುವುದು ಕಷ್ಟಸಾಧ್ಯ.
ಹಣ ಬಲ ಮತ್ತು ತೋಳ್ಬಲ ಇರುವವರು ಮಾತ್ರ ರಾಜಕೀಯ ನಾಯಕರಾಗಬಹುದು ಎಂಬ ಮಾತಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಪ್ರತಿಭಾವಂತ ಮಹಿಳೆಯರಿಗೆ ಅವಕಾಶಗಳು ಸಿಕ್ಕಿ , ಸಮಾಜದಲ್ಲಿ ಈಗಿರುವ ರಾಜಕೀಯದ ಬಗೆಗಿನ ಅಭಿಪ್ರಾಯಗಳು ಬದಲಾದರೆ,
ಎಲ್ಲಾ ಎಲ್ಲೆಗಳ ಗೋಡೆಗಳನ್ನು ಕೆಡವಿ ಸಮರ್ಥನಾಯಕಿಯರು ನಮ್ಮ ಜನಪ್ರತಿನಿಧಿಗಳಾಗುವ ಕಾಲವು ದೂರವಿಲ್ಲ. ಮಹಿಳಾ ಮುಖ್ಯಮಂತ್ರಿಯು ನಮ್ಮ ಕರ್ನಾಟಕವನ್ನಾಳುವ ಕನಸು ನನಸಾಗದೇ ಇರುವುದಿಲ್ಲ.
ಇಂತಿ,
ಕವಿತಾ ಗೋಪಿಕುಂಟೆ
No comments:
Post a Comment
Note: only a member of this blog may post a comment.